ಕಿಟಕಿ ಬಾಗಿಲುಗಳ ತೆರೆದಿಟ್ಟಿರುವೆ
ಮೂಲೆ ಮೂಲೆಯಲ್ಲಿನ ಧೂಳು ಜಾಡಿಸಿ
ಅಲ್ಲಲ್ಲಿ ಹೆಣೆದಿಟ್ಟಿದ್ದ ಬಲೆಗಳನ್ನೆಲ್ಲ
ಜೇಡನ ಸಮೇತ ಕಿತ್ತೆಸೆದಿರುವೆ
ಬರುವುದಾದರೆ ಇಂದೆ ಬಂದುಬಿಡು
ತೋರಣವಿಲ್ಲ ಬಾಗಿಲಿಗೆ
ಹೊಸಿಲಲ್ಲಿಲ್ಲ ರಂಗೋಲಿ
ಎಂದೆಲ್ಲ ಸಬೂಬುಬೇಡ
ನೀ ಬಂದೇ ಬರುವೆಯಾದರೆ
ಆಸೆಗಳ ಧೂಪದಾರತಿ ಎತ್ತಿ
ಕನಸುಗಳನ್ನೆಲ್ಲ ಹೆಣೆದು
ಮಾಲೆ ಮಾಡಿ ಕಾಯುವೆ
ಇಂದೋ, ನಾಳೆಯೋ ಅನುಮಾನಿಸದೆ
ಬಂದೇ ಬಿಡು ಈ ಗಳಿಗೆಯೇ
ನೀ ಬಂದಾಕ್ಷಣವೇ
ಹೊಸದಿನ, ಹೊಸತನ
ಹೊಸಮನ, ಹೊಸತು
ಎಲ್ಲವೂ ಹೊಚ್ಚಹೊಸತು
ವಿದಾಯ ನೆನ್ನೆಗೆ, ನೋವಿಗೆ, ಹತಾಶೆಗೆ
ಪ್ರತೀಕ್ಷೆಯಲ್ಲಿಯೇ ಕಳೆದಾಯಿತು
ಯುಗ ಯುಗವೆಲ್ಲ
ಇನ್ನಾದರೂ ಬಂದು ಬಿಡು
ಕಾಯಿಸದೇ, ವಿಳಂಬಿಸದೆ
*****
Related Post
ಸಣ್ಣ ಕತೆ
-
ಪಾಠ
ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…
-
ವಾಮನ ಮಾಸ್ತರರ ಏಳು ಬೀಳು
"ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…
-
ಗೃಹವ್ಯವಸ್ಥೆ
ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…
-
ಮೌನವು ಮುದ್ದಿಗಾಗಿ!
ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…
-
ದೇವರು
ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…